ADMISSIONS OPEN FOR ACADEMIC SESSION 2025-26 FOR NURSERY TO GRADE X.

  • (+91) 90364 89752
  • contact@gnanayogisociety.com

ಕಾರ್ಯದರ್ಶಿ ಸಂದೇಶ

ಭಾರತೀಯ ಮೌಲ್ಯಾಧಾರದ ಶಿಕ್ಷಣ ಮತ್ತು ಗುರುವಿನ ಶ್ರೇಷ್ಠ ಪಾತ್ರ
ನನ್ನ ಪ್ರೀತಿಯ ಶೈಕ್ಷಣಿಕ ಕುಟುಂಬ,
ಶಿಕ್ಷಣವು ಕೇವಲ ಪಾಠಗಳನ್ನು ಕಲಿಯುವ ಪ್ರಕ್ರಿಯೆಯಲ್ಲ, ಅದು "ಜೀವನ ರೂಪಿಸುವ ಪಯಣ". ಪ್ರಾಚೀನ ಭಾರತವು ಶಿಕ್ಷಣವನ್ನು "ಆಧ್ಯಾತ್ಮಿಕ ಬೆಳವಣಿಗೆ, ಸಂಸ್ಕಾರ, ಹಾಗೂ ಜ್ಞಾನ ಪ್ರಸಾರ" ಎಂದು ಪರಿಗಣಿಸಿದೆ. ಇದರ ಮೂಲಭೂತ ಶಕ್ತಿ ನಮ್ಮ ಗುರು-ಶಿಷ್ಯ ಪರಂಪರೆ. ಗುರುವಿನ ಮಾರ್ಗದರ್ಶನದಲ್ಲಿ ಶಿಷ್ಯರು ಕೇವಲ ವಿದ್ಯಾವಂತನಾಗುವುದಿಲ್ಲ, ಬದಲಾಗಿ ನೈತಿಕ, ಬೌದ್ಧಿಕ ಮತ್ತು ಮಾನಸಿಕ ಪ್ರಗತಿಯನ್ನುಸಾಧಿಸುತ್ತಾರೆ.
ನಮ್ಮ ಶಾಲೆಯಲ್ಲಿ, ನವ ಪೀಳಿಗೆಯನ್ನು "ಸಂಸ್ಕಾರಯುತ, ಸಂವೇದನಾಶೀಲ ಮತ್ತು ಶಿಸ್ತುಬದ್ಧ ನಾಗರಿಕರಾಗಿ ರೂಪಿಸುವ ಶಿಕ್ಷಣ" ನೀಡಲು ಬದ್ಧರಾಗಿದ್ದೇವೆ. ನಾವು ಶಿಕ್ಷಣದ ಮೂಲಕ ಕೇವಲ ವಿಷಯದ ಅರಿವು ಮಾತ್ರವಲ್ಲ, ಜವಾಬ್ದಾರಿಯುತ ಜೀವನದ ದಾರಿಯನ್ನೂ ಕಲಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
ಗುರು ಕೇವಲ ಪಾಠ ಮಾಡುವುದು ಮಾತ್ರವಲ್ಲ, ಅವರು ಜ್ಞಾನ ದೀಪವನ್ನು ಬೆಳಗುವವರು, ಸಮಾಜದ ಉತ್ತಮ ಭವಿಷ್ಯಕ್ಕೆ ಶಿಲ್ಪಿಗಳಾಗುವ ವಿದ್ಯಾರ್ಥಿಗಳನ್ನು ರೂಪಿಸುವವರು. ಅವರು ವಿದ್ಯಾರ್ಥಿಗಳ ಚಿಂತನಾ ಶಕ್ತಿಯನ್ನು ಹೆಚ್ಚಿಸಿ, ಆತ್ಮವಿಶ್ವಾಸವನ್ನು ಬೆಳಸಿ, ಜೀವನದ ಮಹತ್ವದ ಪಾಠಗಳನ್ನು ಕಲಿಸುವ ಗುರಿ ಹೊಂದಿರುತ್ತಾರೆ.
ನಾವು ಸಾಂಸ್ಕೃತಿಕ ಮೌಲ್ಯಗಳು ಮತ್ತು ಆಧುನಿಕ ವಿದ್ಯೆ ಎರಡರ ಸಮ್ಮಿಲನವನ್ನು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ತರುವ ಆಶಯ ಹೊಂದಿದ್ದೇವೆ. ನಾವೆಲ್ಲರೂ ಒಟ್ಟಾಗಿ ಭಾರತೀಯ ಪರಂಪರೆಯ ಶ್ರೇಷ್ಠತೆಯನ್ನು ಉಳಿಸಿಕೊಂಡು, ಆಧುನಿಕ ಜ್ಞಾನವನ್ನು ಅಪ್ಪಿಕೊಂಡು ಉಜ್ವಲ ಭವಿಷ್ಯಕ್ಕಾಗಿ ಪಣ ತೊಡೋಣ.

ನಮ್ಮ ಈ ಬದಲಾಗುತ್ತಿರುವ ವಿಶ್ವದಲ್ಲಿ, ವಿದ್ಯಾರ್ಥಿಗಳು ನೈತಿಕತೆ, ಜ್ಞಾನ ಮತ್ತು ಸ್ವಾವಲಂಬನೆ ಹೊಂದಲು ಪ್ರೇರಿತರಾಗಬೇಕು. ಈ ಪಯಣದಲ್ಲಿ ಗುರುವಿನ ಮಾರ್ಗದರ್ಶನ, ಮೌಲ್ಯಾಧಾರಿತ ಶಿಕ್ಷಣ, ಮತ್ತು ಮಕ್ಕಳ ಸಾರ್ಥಕ ಕಲಿಕೆ ನಮಗೆ ಸಹಕಾರಿಯಾಗಲಿದೆ.

ನಿಮ್ಮ ಸಹಯೋಗ ಮತ್ತು ಪ್ರೋತ್ಸಾಹಕ್ಕಾಗಿ ಧನ್ಯವಾದಗಳು!


ಬಸವರಾಜ ಯಂಕಂಚಿ

ಕಾರ್ಯದರ್ಶಿ
ಜೈ ಗುರುದೇವ ಶಿಕ್ಷಣ ಸಂಸ್ಥೆ


Recent News & Events

NO DATA!